'ಅನ್ವೇಷಣೆ' ಪದ್ಯದ ಹಿಂದಿನ ಅಭ್ಯಾಸದ
ಪ್ರಶ್ನೋತ್ತರಗಳು ಹಾಗೂ ಭಾಷಾಭ್ಯಾಸದ ಉತ್ತರಗಳು
II. ಪ್ರಶ್ನೆಗಳು
ಅ)
ಕೆಳಗೆ ನೀಡಿರುವ ಪದ್ಯದ ಸಾಲುಗಳನ್ನು ಪೂರ್ಣಗೊಳಿಸಿರಿ:
೧. ಎಲ್ಲೋ ಹುಡುಕಿದೆ ಇಲ್ಲದ ದೇವರ ಕಲ್ಲು
ಮಣ್ಣುಗಳ
ಗುಡಿಯೊಳಗೆ.
೨. ಒಳಗಿನ
ತಿಳಿಯನು ಕಲಕದೆ ಇದ್ದರೆ ಅಮೃತದ ಸವಿಯಿದೆ ನಾಲಗೆಗೆ.
೩.
ಹತ್ತಿರವಿದ್ದೂ
ದೂರ ನಿಲ್ಲುವೆವು.
೪. ಎಷ್ಟು
ಕಷ್ಟವೋ ಹೊಂದಿಕೆ ಎಂಬುದು
ನಾಲ್ಕು ದಿನದ ಈ ಬದುಕಿನಲಿ.
ಆ)
ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ:
೧.
ಕವಿ ಜಿ.ಎಸ್. ಶಿವರುದ್ರಪ್ಪನವರು ಮೊದಲು ದೇವರನ್ನು ಎಲ್ಲಿ ಹುಡುಕಿ ವಿಫಲರಾದರು?
ಉತ್ತರ: ಕವಿ
ಜಿ.ಎಸ್. ಶಿವರುದ್ರಪ್ಪನವರು ಮೊದಲು ಕಲ್ಲು ಮಣ್ಣುಗಳ ಗುಡಿಯೊಳಗೆ ದೇವರನ್ನು ಹುಡುಕಿ
ವಿಫಲರಾದರು.
೨.
ನಂದನ ಮತ್ತು ಬಂಧನ ಎಂದರೆ ಏನು? ಅವು ಎಲ್ಲಿವೆ?
ಉತ್ತರ:
ನಂದನ ಎಂದರೆ ಸ್ವರ್ಗ ಮತ್ತು ಬಂಧನ ಎಂದರೆ ಸೆರೆ (ಕಟ್ಟು); ಅವುಗಳು ನಮ್ಮೊಳಗೇ ಇವೆ.
೩.
ಅಮೃತದ ಸವಿ ನಾಲಗೆಗೆ ಯಾವಾಗ ಸಿಗುತ್ತದೆ?
ಉತ್ತರ:
ನಮ್ಮ ಒಳಗಿನ ತಿಳಿಯಾದ ಮನಸ್ಸನ್ನು ಕೆಟ್ಟ ಆಲೋಚನೆಗಳಿಂದ ಕಲಕದೆ ಇದ್ದರೆ ನಾಲಗೆಗೆ ಅಮೃತದ ಸವಿ
ಸಿಗುತ್ತದೆ.
೪.
ಮಾನವನಲ್ಲಿ ಅಹಂ ತುಂಬಿದಾಗ ಹೇಗೆ ವರ್ತಿಸುತ್ತಾನೆ?
ಉತ್ತರ:
ಮಾನವನಲ್ಲಿ ಅಹಂ ತುಂಬಿದಾಗ,
ಎಲ್ಲರ ಹತ್ತಿರವಿದ್ದರೂ ಪರಸ್ಪರ ದೂರ ನಿಲ್ಲುವಂತೆ ವರ್ತಿಸುತ್ತಾನೆ.
ಇ)
ಕೆಳಗಿನ ಪ್ರಶ್ನೆಗಳಿಗೆ ಮೂರು-ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿರಿ:
೧.
ಕವಿ ಜಿ.ಎಸ್.ಎಸ್. ಅವರು ದೇವರನ್ನು ಅನ್ವೇಷಿಸಿದ ಬಗೆ ಹೇಗೆ?
ಉತ್ತರ: ಕವಿ
ಶಿವರುದ್ರಪ್ಪನವರು ಮೊದಲು ದೇವರನ್ನು ಕಲ್ಲು ಮಣ್ಣುಗಳ ಗುಡಿಯೊಳಗೆಲ್ಲ ಹುಡುಕಿದರು. ಆದರೆ
ನಿಜವಾದ ದೇವರು ಅಲ್ಲಿರಲಿಲ್ಲ. ಬದಲಾಗಿ, ನಮ್ಮೊಳಗೇ ಇರುವ ಪ್ರೀತಿ ಮತ್ತು
ಸ್ನೇಹಗಳನ್ನು ನಾವು ಗುರುತಿಸದಾದೆವು ಎಂದು ತಿಳಿಸುವ ಮೂಲಕ ಅವರು ದೇವರನ್ನು ಅನ್ವೇಷಿಸಿದ
ಬಗೆಯನ್ನು ಕವನದಲ್ಲಿ ವರ್ಣಿಸಿದ್ದಾರೆ.
೨.
ಕವಿ ಹೇಳುವಂತೆ ಬದುಕಿನಲ್ಲಿ ಯಾವುದು ಕಷ್ಟ? ಅದನ್ನು ಪಡೆಯುವುದು ಹೇಗೆ?
ಉತ್ತರ:
ನಾಲ್ಕು ದಿನದ ಈ ಬದುಕಿನಲ್ಲಿ ಇತರರೊಂದಿಗೆ 'ಹೊಂದಿಕೆ' (ಹೊಂದಾಣಿಕೆ)ಯಿಂದ
ಬಾಳುವುದು ಬಹಳ ಕಷ್ಟ ಎಂದು ಕವಿ ಹೇಳುತ್ತಾರೆ. ನಮ್ಮಲ್ಲಿರುವ ಅಹಮ್ಮಿನ (ಅಹಂಕಾರದ) ಕೋಟೆಯನ್ನು
ಕೆಡವಿ, ಇತರರೊಡನೆ
ಪ್ರೀತಿ-ಸ್ನೇಹದಿಂದ ಬೆರೆತಾಗ ಮಾತ್ರ ಈ ಹೊಂದಾಣಿಕೆಯನ್ನು ಪಡೆಯಲು ಸಾಧ್ಯವಾಗುತ್ತದೆ.
ಈ)
ಸಂದರ್ಭದೊಡನೆ ವಿವರಿಸಿರಿ:
೧.
"ಪ್ರೀತಿ ಸ್ನೇಹಗಳ ಗುರುತಿಸದಾದೆವು ನಮ್ಮೊಳಗೆ"
- ಆಯ್ಕೆ: ಈ ವಾಕ್ಯವನ್ನು ಡಾ. ಜಿ.ಎಸ್. ಶಿವರುದ್ರಪ್ಪನವರು ಬರೆದಿರುವ 'ಗೋಡೆ' ಕವನ
ಸಂಕಲನದಿಂದ ಆಯ್ದ 'ಅನ್ವೇಷಣೆ'
ಎಂಬ ಪದ್ಯದಿಂದ ಆರಿಸಲಾಗಿದೆ.
- ಸಂದರ್ಭ: ನಾವು ಕಲ್ಲು ಮಣ್ಣುಗಳ ಗುಡಿಯಲ್ಲಿ ದೇವರನ್ನು ಹುಡುಕುತ್ತೇವೆ. ಆದರೆ ನಿಜವಾದ ದೇವರಾದ
ಪ್ರೀತಿ, ಸ್ನೇಹಗಳು ನಮ್ಮೊಳಗೇ ಇದ್ದರೂ ಅಹಂಕಾರದಿಂದಾಗಿ ಅದನ್ನು ನಾವು ಗುರುತಿಸುತ್ತಿಲ್ಲ
ಎಂದು ಕವಿಯು ವಿಷಾದದಿಂದ ಹೇಳುವ ಸಂದರ್ಭ ಇದಾಗಿದೆ.
- ಸ್ವಾರಸ್ಯ: ಕೃತಕವಾದ
ಬಾಹ್ಯ ಆಡಂಬರಗಳಿಗಿಂತ ಮನುಷ್ಯನ
ಆಂತರಿಕ ಮೌಲ್ಯಗಳೇ ಶ್ರೇಷ್ಠ ಎಂಬುದು
ಈ ವಾಕ್ಯದ ಸ್ವಾರಸ್ಯವಾಗಿದೆ.
- ೨. "ಅಮೃತದ ಸವಿಯಿದೆ
ನಾಲಗೆಗೆ"
- ಆಯ್ಕೆ: ಈ ವಾಕ್ಯವನ್ನು ಡಾ. ಜಿ.ಎಸ್. ಶಿವರುದ್ರಪ್ಪನವರು ಬರೆದಿರುವ 'ಗೋಡೆ' ಕವನ
ಸಂಕಲನದಿಂದ ಆಯ್ದ 'ಅನ್ವೇಷಣೆ'
ಎಂಬ ಪದ್ಯದಿಂದ ಆರಿಸಲಾಗಿದೆ.
- ಸಂದರ್ಭ: ಸ್ವರ್ಗ ಮತ್ತು ನರಕಗಳೆರಡೂ ನಮ್ಮೊಳಗೇ ಇವೆ. ನಮ್ಮ ಒಳಗಿನ ತಿಳಿಯಾದ ಮನಸ್ಸನ್ನು ನಾವು
ಕಲಕದೆ (ಕೆಡಿಸಿಕೊಳ್ಳದೆ) ಇದ್ದರೆ, ನಾವು ಆಡುವ ಮಾತು ನಾಲಗೆಗೆ ಅಮೃತದ
ಸವಿಯಂತಿರುತ್ತದೆ ಎಂದು ಕವಿ ವಿವರಿಸುವ ಸಂದರ್ಭ ಇದಾಗಿದೆ.
- ಸ್ವಾರಸ್ಯ: ನಮ್ಮ
ಅಂತರಂಗದ ಶುದ್ಧಿಯೇ ನಮ್ಮ ಆಡುವ
ಮಾತಿನ ಸೌಂದರ್ಯವನ್ನು ಹೆಚ್ಚಿಸುತ್ತದೆ ಎಂಬುದು ಇದರ ಒಳಾರ್ಥವಾಗಿದೆ.
- ೩. "ಹತ್ತಿರವಿದ್ದೂ
ದೂರ ನಿಲ್ಲುವೆವು"
- ಆಯ್ಕೆ: ಈ ವಾಕ್ಯವನ್ನು ಡಾ. ಜಿ.ಎಸ್. ಶಿವರುದ್ರಪ್ಪನವರು ಬರೆದಿರುವ 'ಗೋಡೆ' ಕವನ
ಸಂಕಲನದಿಂದ ಆಯ್ದ 'ಅನ್ವೇಷಣೆ'
ಎಂಬ ಪದ್ಯದಿಂದ ಆರಿಸಲಾಗಿದೆ.
- ಸಂದರ್ಭ: ಮನುಷ್ಯರಾದ ನಾವು ಅಹಂಕಾರದ (ಅಹಮ್ಮಿನ) ಕೋಟೆಯನ್ನು ಕಟ್ಟಿಕೊಂಡು, ಪರಸ್ಪರ
ಪ್ರೀತಿಯಿಂದ ಬೆರೆಯದೆ,
ಭೌತಿಕವಾಗಿ ಎಲ್ಲರ ಹತ್ತಿರವಿದ್ದರೂ ಮಾನಸಿಕವಾಗಿ ದೂರ
ನಿಲ್ಲುವೆವು ಎಂದು ಕವಿಯು ಮನುಷ್ಯನ ಸ್ವಭಾವವನ್ನು ವಿವರಿಸುವ ಸಂದರ್ಭ ಇದಾಗಿದೆ.
- ಸ್ವಾರಸ್ಯ: ಅಹಂಕಾರವನ್ನು ಸಂಪೂರ್ಣವಾಗಿ ತೊರೆದು ಎಲ್ಲರೊಂದಿಗೆ ಪ್ರೀತಿ ಹಾಗೂ ಹೊಂದಾಣಿಕೆಯಿಂದ ಬೆರೆತು ಬದುಕುವುದೇ ನಿಜವಾದ
ಜೀವನ ಎಂಬುದು ಈ ವಾಕ್ಯದ
ಆಶಯವಾಗಿದೆ.
ಉ)
ಬಿಟ್ಟ ಸ್ಥಳಗಳನ್ನು ನೀಡಿರುವ ನಾಲ್ಕು ಆಯ್ಕೆಯ ಉತ್ತರಗಳಿಂದ ಸರಿಯಾದುದನ್ನು ಆಯ್ದು ಬರೆಯಿರಿ:
೧. ಕವಿ ಜಿ.ಎಸ್.ಎಸ್. ಅವರು ದೇವರನ್ನು ____________ ರೊಪದಲ್ಲಿ
ಕಂಡರು. ಉತ್ತರ: ಇ)
ಪ್ರೀತಿ ಸ್ನೇಹ
೨.
ಬದುಕಿನಲ್ಲಿ ____________
ಎಂಬುದು ಕಷ್ಟ ಎಂದು ಕವಿ ಹೇಳುತ್ತಾರೆ. ಉತ್ತರ: ಅ)
ಹೊಂದಾಣಿಕೆ (ಹೊಂದಿಕೆ)
೩.
ನಮ್ಮೊಳಗಿನ ತಿಳಿಯನು ಕಲಕದೆ ಇದ್ದರೆ ನಾಲಗೆಗೆ ____________ ಇದೆ. ಉತ್ತರ: ಈ)
ಅಮೃತ
೪. ಅಹಂ
ಇರುವ ವ್ಯಕ್ತಿ ಜನರಿಗೆ ____________
ಆಗುತ್ತಾನೆ.
ಉತ್ತರ:
ಇ) ದೂರ
III. ಭಾಷಾಭ್ಯಾಸ
ಅ)
ಕೆಳಗಿನ ಪದಗಳಿಗೆ ಸಮಾನಾರ್ಥಕಗಳನ್ನು ಬರೆಯಿರಿ:
- ಗುಡಿ - ದೇವಾಲಯ, ಮಂದಿರ.
- ಹತ್ತಿರ - ಸಮೀಪ, ಬಳಿ.
- ಬಂಧನ - ಸೆರೆ, ಕಟ್ಟು.
- ಸ್ನೇಹ - ಗೆಳೆತನ, ಪ್ರೀತಿ.
ಆ)
ಕೆಳಗಿನ ಪದಗಳಿಗೆ ವಿರುದ್ಧಾರ್ಥಕ ಬರೆಯಿರಿ:
- ಪ್ರೀತಿ x ದ್ವೇಷ
- ದೂರ x ಹತ್ತಿರ
- ಅಮೃತ x ವಿಷ / ಮೃತ
- ಸಿಹಿ x ಕಹಿ
- ಕಷ್ಟ x ಸುಖ
- ಬಂಧನ x ಬಿಡುಗಡೆ / ನಂದನ
ಇ)
ಕೆಳಗಿನ ಪದಗಳನ್ನು ಸ್ವಂತ ವಾಕ್ಯದಲ್ಲಿ ಬರೆಯಿರಿ:
- ದೇವರು: ನಾವು ಕಷ್ಟದಲ್ಲಿರುವಾಗ ಸಹಾಯ ಮಾಡುವವರೇ ನಿಜವಾದ ದೇವರು.
- ಪ್ರೀತಿಸ್ನೇಹ: ಸಮಾಜದಲ್ಲಿ ನಾವೆಲ್ಲರೂ ಪ್ರೀತಿ ಸ್ನೇಹದಿಂದ ಒಟ್ಟಾಗಿ ಬಾಳಬೇಕು.
- ಬಂಧನ: ಕೆಟ್ಟ ಆಲೋಚನೆಗಳ ಬಂಧನದಿಂದ
ನಾವು ನಮ್ಮ ಮನಸ್ಸನ್ನು ಮುಕ್ತಗೊಳಿಸಬೇಕು.
- ಅಮೃತ: ಹಸುವಿನ ಹಾಲು ಆರೋಗ್ಯಕ್ಕೆ ಅಮೃತಕ್ಕೆ
ಸಮಾನವಾಗಿದೆ.
- ಹೊಂದಿಕೆ: ಸಂಸಾರದಲ್ಲಿ ಎಲ್ಲರೊಡನೆ ಹೊಂದಿಕೆಯಿಂದ ಬಾಳುವುದು ಬಹಳ ಮುಖ್ಯ.
- ಅಹಂ: ಮನುಷ್ಯನಿಗೆ ಅಹಂ (ಅಹಂಕಾರ) ಇರಬಾರದು.
ಈ)
ಕೆಳಗಿನ ಪದಗಳನ್ನು ಬಿಡಿಸಿ ಬರೆಯಿರಿ:
- ಹತ್ತಿರವಿದ್ದೂ = ಹತ್ತಿರ + ಇದ್ದೂ
- ಗುಡಿಯೊಳಗೆ = ಗುಡಿ + ಒಳಗೆ
- ಸವಿಯಿದೆ = ಸವಿ + ಇದೆ
- ನಮ್ಮೊಳಗೆ = ನಮ್ಮ + ಒಳಗೆ
ಉ)
ಸುಳಿವು ಪದಗಳನ್ನು ಬಳಸಿ ಜೋಡಿ ಪದಗಳನ್ನು ಬರೆಯಿರಿ: (ಸುಳಿವು: ಮರ, ಹಣ್ಣು, ನೀತಿ, ಬೆಟ್ಟ, ಗದ್ದೆ, ಬೆಳೆ, ಸುಳ್ಳು, ಬಲ)
ಉದಾ: ಕಲ್ಲು
- ಮಣ್ಣು, ಪ್ರೀತಿ
- ಸ್ನೇಹ
- ಹೊಲ - ಗದ್ದೆ
- ಗಿಡ - ಮರ
- ಗುಡ್ಡ - ಬೆಟ್ಟ
- ಎಡ - ಬಲ
- ಹೂವು - ಹಣ್ಣು
- ಕಳ್ಳ - ಸುಳ್ಳು
- ಮಳೆ - ಬೆಳೆ
- ರೀತಿ - ನೀತಿ
No comments:
Post a Comment